ಕನ್ನಡದ ಉಲಿಗಳು

“]ಉಲಿಗಳು ಹುಟ್ಟುವ ತಾವುಗಳು[wikipedia]

ಉಲಿಗಳು ಹುಟ್ಟುವ ತಾವುಗಳು[wikipedia

ಕನ್ನಡದ್ದೇ ಉಲಿಗಳು ಎಂಬುದರ ಬಗ್ಗೆ ಕೆಲವು ಮಾತುಕತೆ. ಇದು ಬರೆಗುರುತುಗಳ(ಲಿಪಿ) ಬಗ್ಗೆಯಲ್ಲ.

ಊ ಬದುಕಿರೋ ನುಡಿಯೂ ಅದು ಬದುಕಿರೋದು ಎಂದರೆ ಅದನ್ನು ಮಂದಿ ಇನ್ನೂ ಉಲಿಯುತ್ತಿದ್ದಾರೆ. ಅದರಿಂದ ಒಬ್ಬರಿಗೊಬ್ಬರು ಅರಿಮೆಗಳನ್ನು(information) ಹಂಚಿಕೊಳ್ಳುತ್ತಿದ್ದಾರೆ. ಆ ನುಡಿಯಲ್ಲಿ ಮಾತಾಡುತ್ತಿದ್ದಾರೆ ಎಂದು. ನುಡಿಯ ಉಸಿರೇ ಅದರ ಉಲಿಗಳು, ಸದ್ದುಗಳು. ಒಂದು ನುಡಿಯ ಉಲಿಗಳ ಬಗ್ಗೆಯ ಆರಯ್ಯು(Research) ಮತ್ತು ಅರಿವುಗಳನ್ನು ಉಲಿಯರಿಮೆ(Phonology) ಎನ್ನುವರು.

ಎಲ್ಲ ನುಡಿಗಳಲ್ಲಿರುವ ಎಲ್ಲ ಉಲಿಗಳು ಬೇರೆ ಎಲ್ಲ ನುಡಿಗಳಲ್ಲಿ ಇರುವುದಿಲ್ಲ. ಒಂದು ನುಡಿಯಲ್ಲಿರಿವ ಉಲಿಗಳು ಮತ್ತೊಂದು ನುಡಿಯಲ್ಲಿ ಇರದೇ ಇರಬಹುದು. ಆದುದರಿಂದ ಅವುಗಳನ್ನು ಬೇರೆನುಡಿಗರು ಉಲಿಯಲಾರದೇ ಇರಬಹುದು. ಒಂದು ನುಡಿಯಲ್ಲಿರುವ ಪದಗಳನ್ನು ಅದನ್ನು ಮಾತಾಡದ, ತಮ್ಮ ಬುಡಕಟ್ಟಿನ, ತಾಯಿಮಾತು, ಮನೆಮಾತಲ್ಲದ ಮಂದಿಗೆ ದೊಡ್ಡ ತೊಡಕು. ಈ ತೊಡಕಿನಿಂದಲೇ ಬೇರೆಬೇರೆ ನುಡಿಯ ಮಂದಿ ತಮ್ಮದಲ್ಲದ ನುಡಿಗಳನ್ನು ಹಸನಾಗಿ ನೀಟಾಗಿ ಉಲಿಯಲಾರರು. ಹೀಗೆ ಮತ್ತೊಂದು ನುಡಿಯನ್ನು ಉಲಿಯುವಾಗ ಆಗುವ ಉಲಿತಪ್ಪುಗಳನ್ನು ತೀರಿಸಲು ಆಗೋದೇ ಇಲ್ಲ ಎಂದೇ ಹೇಳಬೇಕು. ಮಾದರಿಯಾಗಿ ಇಂಗ್ಲಿಶ್ ನುಡಿಯುವ ಹೆಚ್ಚು ಇಂಡಿಯಿಗರೆಲ್ಲ ಇಂಗ್ಲಿಶಿನ ಎರಡು ’ವ’, ಉಸಿರುಲಿ(Aspirated),  ಪದದ ಕೊನೆಯ ’ಱ್’ ಮುಂತಾದ ತಮ್ಮ ನುಡಿಯಲ್ಲಿ, ಉಲಿಕೆಯಲ್ಲಿ ಇರದ ಉಲಿಯನ್ನು ಸರಿಯಾಗಿ ನುಡಿಯೋದೇ ಇಲ್ಲ.  ಹಾಗೇ ಸಂಸ್ಕ್ರುತ, ಪ್ರಾಕ್ರುತದ(ಹಿಂದಿ ಮುಂತಾದವು) ನುಡಿಗರಿಗೆ ದ್ರಾವಿಡನುಡಿಗಳ ಉಲಿಗಳಾದ ’ಎ’, ’ಒ’, ’ಳ’, ’ೞ’, ’ಱ’ಗಳು ಉಲಿಯ ಬರುವುದಿಲ್ಲ.  ಹೀಗೆ ಬೇರೊಂದು ನುಡಿಯ ಉಲಿಗಳನ್ನು ಉಲಿಯುವಲ್ಲಿ ಆಗುವ ತಪ್ಪುಗಳನ್ನು ಕೊರತೆಯಂದು ಎಣಿಸಲೇ ಬಾರದು. ಏಕೆಂದರೆ ಆ ಆ ನುಡಿಗರು ತಮ್ಮ ತಮ್ಮ ನುಡಿಯ ಉಲಿಕೆಯ ಉಲಿಗಳನ್ನು ಚನ್ನಾಗೇ ಉಲಿಯಬಲ್ಲರು. ಇದೇ ತೆರ ಹೆಚ್ಚು ಕನ್ನಡಿಗರಿಗೂ ತಮ್ಮ ಕನ್ನಡದ್ದ ಉಲಿಕೆಯಲ್ಲಿರದ ಉಲಿಗಳನ್ನು ಉಲಿಯುವಲ್ಲಿ ತೊಡಕು ಮತ್ತು ಉಲಿಯಲಾರದೇ ಇರುವುದು ಕೊರತೆಯಲ್ಲ.

ಆದುದರಿಂದ ಕನ್ನಡದ್ದೇ ಉಲಿಗಳು ಯಾವುವು ಎಂದು ತಿಳಿಯುವುದು ನಮ್ಮ ಕಲಿಕೆಗೆ ಬೇಕೇ ಬೇಕಾದುದು. ಆ ಕುರಿತು ನಮ್ಮ ಸೊಲ್ಲರಿಮೆಗಾರರು(Grammarians) ಮತ್ತು ಕಲಿಸಿಗರು(Teachers) ಹೆಚ್ಚು ಆರಯ್ಯುಗಳನ್ನಾಗಲಿ, ಇಲ್ಲಿಯ ವರೆಗೂ ಒತ್ತನ್ನಾಗಲಿ ಕೊಟ್ಟ ಹಾಗೆ ಕಾಣುತ್ತಿಲ್ಲ. ಇದರಿಂದ ಕನ್ನಡದ ಮಕ್ಕಳಿಗೆ ಬೇರೆ ನುಡಿಯ ತಮ್ಮ ಉಲಿಗಳಲ್ಲಿಲ್ಲದ ಪದಗಳನ್ನು ಉಲಿಯುವಲ್ಲಾಗುವ ತಪ್ಪುಗಳಿಂದ ಕೀಳರಿಮೆಪಟ್ಟುಕೊಳ್ಳುತ್ತಾರೆ. ಈ ಕೀಳರಿಮೆಗೆ ನಮ್ಮ ಕಲಿಸಿಗರೇ ಅರಯಮಿಕೆ(ಅಜ್ಞಾನ)ವೂ ದೊಡ್ಡ ಸಲುವು(ಕಾರಣ). ನಮ್ಮ ಕಲಿಸಿಗರಿಗೆ ನಮ್ಮ ಕನ್ನಡದ್ದೇ ಉಲಿಕೆಯ ಅರಿವಿಲ್ಲದಿರುವುದು ಮತ್ತು ಕನ್ನಡದ ಸೊಲ್ಲರಿಮೆಗಳು(Grammars), ಕನ್ನಡ ಸೇರದ ದ್ರಾವಿಡನುಡಿಗುಂಪಿಗಿಂತ ಬೇರೆಯೇ ಆದ ಸಂಸ್ಕ್ರುತದ ಸೊಲ್ಲರಿಮೆಯಂತೆ ಇರುವುದು,  ದೊಡ್ಡ ಕನ್ನಡದ ಉಲಿಯ ದಿಟತನವನ್ನು ಅರಿಯುವಲ್ಲಿ ಕುತ್ತೇ ಆಗಿದೆ.

ಈ ನೆಲದಲ್ಲಿ ಒಟ್ಟು ನೂರೆರಡು/೧೦೨ ಉಲಿಗಳಿವೆ. ಆದರೆ ಅವಶ್ಟೂ ಒಂದೇ ನುಡಿಯಲ್ಲಿಲ್ಲ.

ಕನ್ನಡದ್ದೇ ಆದ ಪದಗಳನ್ನು ಗಮನಿಸಿದಾಗ, ಇಲ್ಲವೇ ಈ ಕುರಿತು ಆರಯ್ಯುಗಳನ್ನು ನಡೆಸಿರುವ ಶಂಕರಬಟ್ಟರು ಮುಂತಾದವರ ಹೊತ್ತಗೆಗಳನ್ನು ಓದಿದರೆ ಸಲೀಸಾಗಿ ನಮಗೆ ಕನ್ನಡದ್ದೇ ಉಲಿಗಳು ಅರಿವಾಗುವುವು.

ಕನ್ನಡದಲ್ಲಿ ಅಯ್ದು  ಅ, ಇ, ಉ, ಎ, ಒ  ತೆರೆಯುಲಿ(vowel)ಗಳು ಮತ್ತು ಗಿಡ್ಡತೆರಯುಲಿ(short vowel)ಗಳಿಗೆ ಸಮವಾಗಿ ಅಯ್ದು ಆ, ಈ, ಊ, ಏ, ಓ ಉದ್ದತೆರೆಯುಲಿ(long vowel)ಗಳಿವೆ. ಇವನ್ನು ಬಿಟ್ಟು ಬಡಗ ಕನ್ನಡ ಮತ್ತು ಬೇರೆ ಕನ್ನಡದ ಕವಲುಗಳಲ್ಲಿ ಕೆಲವು ಬಗೆಯ ’ಅ’ ಮತ್ತು ’ಎ’ಗಳಿವೆ. ಆದರೆ ಹೆಚ್ಚು ಕನ್ನಡಿಗರು ಅದನ್ನು ಬಳಸುವುದಿಲ್ಲ. ಆದುದರಿಂದ ಅವನ್ನು ಎಣಿಸಿಲ್ಲ.

ಇನ್ನು ಮುಚ್ಚುಲಿಗಳು(consonents) ಕ, ಗ, ಙ, ಚ, ಜ, ಞ, ಟ, ಡ ಣ, ತ, ದ, ನ, ಪ, ಬ, ಮ , ಯ, ರ, ಲ, ವ, ಶ, ಸ, ಹ, ಳ, ೞ, ಱ ಒಟ್ಟು ೨೩.

ಒಟ್ಟು ಕನ್ನಡದ್ದೇ ಉಲಿಗಳು ಮುವ್ವತ್ತೆರಡು/ಮೂವತ್ತೆರಡು/೩೨

ಅ ಆ ಇ ಈ ಉ ಊ ಎ ಏ ಒ ಓ

ಕ ಗ ಙ

ಚ ಜ ಞ

ಟ ಡ ಣ

ತ ದ ನ

ಪ ಬ ಮ

ಯ, ರ, ಲ, ವ, ಶ, ಸ, ಹ, ಳ, ೞ, ಱ [ ೞ, ಱ ಹಳಗನ್ನಡದ ಉಲಿಗಳು. ಇನ್ನು ಕನ್ನಡದ ಕೆಲವು ಕವಲುಗಳಲ್ಲಿ ಬಳಕೆಯಲ್ಲಿವೆ ]

-ಮಾಯ್ಸ

ನೆರವು :

ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು – ಡಾ. ಡಿ.ಎನ್.ಶಂಕರ ಬಟ್ಟ

ಕನ್ನಡ ಬರಹವನ್ನು ಸರಿಪಡಿಸೋಣ – ಡಾ. ಡಿ.ಎನ್.ಶಂಕರಬಟ್ಟ

ಹೊರನುಡಿಯ ಎಸಗೊರೆಗಳ(verbs) ಕಿರಿಕಿರಿ

ಬರೆಯೋವಾಗ ಆದಶ್ಟು ಕನ್ನಡದಲ್ಲಿ ಬರೀಬೇಕು ಅಂದುಕೋತೀನಿ. ಅದು ಕನ್ನಡದ ಮೇಲಿನ ಒಲವು ಅನ್ನೋದಕ್ಕಿಂತ ಬೇರೊಂದು ಸಂಗತಿಯಿಂದಾಗಿ.

ನಾನು ಓದುವಾಗ, ಹಲವು ಕನ್ನಡ ಬರಹದಲ್ಲಿ ಸಂಸ್ಕ್ರುತ ಒರೆಗಳು ಕಾಣಿಸಿಕೊಂಡು ಕಿರಿಕಿರಿಯಾಗುತ್ತವೆ. ಆಗ ಮನಸ್ಸಲ್ಲೇ ಅದನ್ನು ಕನ್ನಡಕ್ಕೆ ಮಾರ್‍ಪಡಿಸಿಕೊಂಡು ನೋಡಿದಾಗ – ಅಲ್ಲೆಲ್ಲಾ ಕನ್ನಡ ಒರೆಗಳಿದ್ದರೆ(words) ಸಾಲುಗಳು ಮತ್ತೂ ಗಟ್ಟಿಯಾಗುತ್ತಿತ್ತಲ್ಲ, ಹೆಚ್ಚು ತಟ್ಟುತ್ತಿತ್ತಲ್ಲ ಅನಿಸಿದ್ದಿದೆ. ಹಾಗೇಕೆ ಆಗುತ್ತದೆ ಎಂಬುದು ಹೊಸ ಸಂಗತಿಯೇನಲ್ಲ. ಬೇರೆ ನುಡಿಯ ಒರೆಗಳ ಬಗ್ಗೆ ಹಲವರು ಈಗಾಗಲೇ ಊಂಕಿದ್ದಾರೆ(think). ನನ್ನ ಇಂಗ್ಲಿಶ್ ಬರಹಗಾರ ಗೆಳೆಯನೊಬ್ಬ ಹೇಳಿದ ಈ ಬಗೆಯ ಮಾತು ನೆನಪಾಯಿತು.

ಇಂಗ್ಲಿಶಿನ suicide ಒರೆಯ ಬೇರು ಇಂಗ್ಲಿಶ್ ಆಗಿರದೆ – ಪ್ರೆಂಚು ನುಡಿಯದಾಗಿದೆ. ಇದು ಇಂಗ್ಲಿಶಿನಲ್ಲಿ ಎಸಗೊರೆಯಾಗಿ ಬಳಕೆಯಾದಾಗ commit ಅನ್ನುವ ಮತ್ತೊಂದು ಒರೆ ಬೇಕೇಬೇಕಾಗುತ್ತದೆ. ಅಶ್ಟರ ಮಟ್ಟಿಗೆ ಅದು ಬಲವಿಲ್ಲದ ಒರೆಯಾಗಿದೆ. ಬೇರೆ ನುಡಿಯ ಒರೆಯಾದ್ದರಿಂದ, ಆ ಒರೆಯ ಸೊಲ್ಲರಿಮೆಯ(ವ್ಯಾಕರಣದ) ಹಲವು ಮಾರ್‍ಪಾಡುಗಳನ್ನು ಅದು ಹೊರಲಾರದು. suicided, suiciding, suicides : ಇವು ಯಾವುದೂ ಬಳಸಲಾಗದ ಮಾರ್‍ಪಾಟುಗಳು. ಬರವಣಿಗೆ, ಮಾತು ಚುರುಕಾಗಲು ಅದು ತಡೆಯಾಗುತ್ತದೆ. ಇಂಗ್ಲಿಶಿನ “killed him/herself” ಅನ್ನೋದು ಹೆಚ್ಚು ತಟ್ಟುವಂತಹ ರೂಪ ಎಂದು ನನ್ನ ಗೆಳೆಯ ತಿಳಿಯುತ್ತಾನೆ.

ಇದಕ್ಕೆ ಓಸುಗರ(ಕಾರಣ) ಹೀಗಿರಬಹುದು – ಒಂದು ನುಡಿಯಿಂದ ಇನ್ನೊಂದು ನುಡಿಗೆ ಮಾಡೊರೆಗಳು ನೇರವಾಗಿ ಬರಲಾಗದು. ಅವು ಹೆಸರೊರೆಯಾಗಿ ಬಂದು ಮತ್ತೆ ಮಾಡೊರೆಯಾಗಿ ಬದಲಾಗಬೇಕಾಗುತ್ತದೆ. ಹಾಗೆ ನೇರವಾಗಿ ಬಂದಾಗಲೂ ಅದರ ಬದಲಿಗೆ ಪಡಕೊಂಡ ನುಡಿಯ ಒರೆಗಳೇ ಹೆಚ್ಚು ಗಟ್ಟಿ/ತಟ್ಟುತ್ತವೆ ಅನಿಸುತ್ತದೆ.

ಅದೇ ಧಾಟಿಯಲ್ಲಿ ಯೋಚಿಸುವಾಗ ಕನ್ನಡದಲ್ಲೂ ಹಾಗೇ ಆಗುತ್ತದಲ್ಲ ಅನಿಸಿತು. ಕನ್ನಡದ ಎಸಗೊರೆಗಳು ತಾವಾಗಿ ಸೊಲ್ಲರಿಮೆಯ ಮಾರ್‍ಪಾಟುಗಳನ್ನು ಯಾವುದೇ ಎಗ್ಗಿಲ್ಲದೆ ಪಡಕೊಳ್ಳುತ್ತವೆ. “ಕೇಳಿದೆ”, “ನೋಡಿದೆ”, “ಹಾಡಿದೆ” ಇವು ಬೇರೆ ನುಡಿಯ ಮಾಡೊರೆಯಿಂದ ಬಂದುದಾದರೆ “ಪ್ರತಿಕ್ರಿಯಿಸಿದೆ”, “ವರ್‍ಣಿಸಿದೆ”, “ನಿರ್‍ಮಾಣ ಮಾಡಿದೆ” “ಗಾಯನ ಮಾಡಿದೆ” ಎಂದೆಲ್ಲಾ ಆಗುತ್ತವೆ. ಮಾತಿನ ಓಟದ ಚುರುಕಿಗೆ ಹಾಗು ಪರಿಣಾಮಕ್ಕೆ ಕನ್ನಡದ ರೂಪಗಳೇ ಹೆಚ್ಚು ಸರಿ ಅನಿಸುತ್ತದೆ.

ಸಂಸ್ಕ್ರುತದಿಂದ ಕನ್ನಡಕ್ಕೆ ಬಂದ ಎಸಗೊರೆಗಳು ಹೀಗಾಗುವುದರಲ್ಲಿ ಎರಡು ರೂಪಗಳು ಕಂಡಿತು (ಇನ್ನೂ ಹೆಚ್ಚಿರಬಹುದು)
ಒಂದು – “ಮಾಡು” ಎಂಬ ಹೆಚ್ಚಿನ ಒರೆ ಬೇಕಾಗುವುದು. suicideಗೆ commit ಅನ್ನುವ ಹಾಗೆ, ಗಾಯನ ಮಾಡು, ವರ್‍ಣನೆ ಮಾಡು… ಹೀಗೆ
ಎರಡು – “ಇಸು” ಎಂಬುದನ್ನು ಸೇರಿಸಬೇಕಾಗುವುದು “ವರ್‍ಣಿಸು”, “ಕರುಣಿಸು”, (ಕನ್ನಡವೇ ಅನ್ನಿಸುವ ತದ್ಭವಗಳಿಗೂ ಇದು ದಿಟ ಅನ್ನುವುದನ್ನು ಗಮನಿಸಿ : “ಬಣ್ಣಿಸು” ಎಂಬಂತೆ)

ಕನ್ನಡದಲ್ಲಿ “ಇಸು” ಎಂಬುದನ್ನೇ ಎರಡು ಬಗೆಯಲ್ಲಿ ಬಳಸುತ್ತೇವೆ.
ಮೊದಲನೆಯದು: ಕನ್ನಡದ ಒರೆಗಳಿಗೆ ಹಚ್ಚಿದಾಗ “ಇನ್ನೊಬ್ಬರು ಮಾಡುವಂತೆ ಮಾಡುವುದು” ಕೇಳಿಸು(ಕೇಳುವಂತೆ ಮಾಡು), ಹೇಳಿಸು(ಹೇಳುವಂತೆ ಮಾಡು), ಹಾಡಿಸು(ಹಾಡುವಂತೆ ಮಾಡು) ಅಂತಹ ರೂಪಗಳು.
ಎರಡನೆಯದು: ಬೇರೆ ನುಡಿಯ ಹೆಸರೊರೆಗಳಿಗೆ ಹಚ್ಚಿ, ಮಾಡೊರೆಯಾಗಿ ಬಳಸುವುದು : “ಚಿತ್ರಿಸು”, “ವಿಸ್ತರಿಸು(ಬಿತ್ತರಿಸು)”… ಹೀಗೆ.

ಇದರಿಂದ ಗೊಂದಲಗಳು ಏಳುವುವು. ಅದೂ ಅಲ್ಲದೇ ಹೀಗೆ ಎಲ್ಲ ಪದಗಳಿಗೂ ಮಾಡಲು ಬರುವುದೇ?
ಪತ್ರ => ಪತ್ರಿಸು?
ದರ್‍ಶನ => ದರ್‍ಶನಿಸು?
ಶಾಕೆ => ಶಾಕಿಸು/ಶಾಕೆಯಿಸು?

- ಅನಿವಾಸಿ

ನೇಸರ

ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು

ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ
ದೂರಾದ ಮಲೆಯ ತಲೆಯಾನೆ ಏರಿ

ಹೊರಳೀತು ಇರಳು ಬೆಳಕೀನ ಬೂಡು
ತೆರಯೀತು ನೋಡು ಬೆಳಗೀತು ನಾಡು

ಬೂಡು = ಒಡೆಯನ ಮನೆ, ಮನೆ, ಬೀಡು

ಮಲೆಯ ತಲೆ = peak, ಬೆಟ್ಟದ ತುದಿ

ನೇಸರ = sun

ಕನಸುಗಣ್ಣು

“][barney.gonzaga.edu]

[barney.gonzaga.edu

ನೆನಪಿನ ನೀರಿನಲಿ ನೆನೆದ,

ನಿನ್ನ ಸವಿ ಮಾತು ನೆನೆದು,

ತುಂಬಿ ಹರಿಸಿತು ಹರೆಯದ ಬಯಕೆ,

ಕಾಣದೆ ನಿನ್ನ ಕಾದು ಕುಂತು ಕೊರಗಿ

ಕೊನೆಗೆ ಕನಸುಗಣ್ಣು ಕವಿಯೆನ್ನಾಗಿಸಿತು.

- ಮಂಜುನಾತ

ಕೆಂಡಸಂಪಿಗೆಗೆ ನನ್ನಿ

ಕೆಂಡಸಂಪಿಗೆ

ಕೆಂಡಸಂಪಿಗೆ

ಶನಿವಾರ, ೧೪ ಮಾರ್ಚ್ ೨೦೦೯ರಂದು ತಿಳಿಗನ್ನಡವನ್ನು ಕೆಂಡಸಂಪಿಗೆಯ ದಿನದ ಬ್ಲಾಗ್ಗಲ್ಲಿ ತಿಳಿಗನ್ನಡವನ್ನು ಜಿತೇಂದ್ರರು ಇಂತು ಹಾರಯ್ಸಿದ್ದಾರೆ.

“ಈಗಷ್ಟೇ ಈ ತಿಳಿಕನ್ನಡಿಗರ ಮೊದಲ ಬರಹ ಕಾಣಿಸಿಕೊಂಡಿದೆ. ಉತ್ಸಾಹಿ ಕನ್ನಡಿಗರು ಹೆಚ್ಚೆಚ್ಚು ಬರೆಯಲಿ, ಬ್ಲಾಗ್ ಬೆಳೆಯಲಿ ಅನ್ನುವುದೇ ನಮ್ಮ ಹಾರೈಕೆ.”

ಮೊದಲು ಅವರಿಗೆ ತುಳಿಲು ಮತ್ತು ನನ್ನಿ.

ನಮ್ಮ ಹಂಬಲ ಬರೀ ನಾವಿಶ್ಟೇ ಮಂದಿ ತಿಳಿಗನ್ನಡದಲ್ಲಿ ಬರೆಯುವುದಲ್ಲ. ಉವರು ಇಲ್ಲಿ ತಮ್ಮ ತಿಳಿಗನ್ನಡದ ಬರಹಗಳನ್ನು ಹೊರತರಬಹುದು. ನಮ್ಮ ಗುರಿ ತಿಳಿಗನ್ನಡವನ್ನು ಉಳಿಸಿ, ಬೆಳೆಸುವುದು. ಇಲ್ಲಿ ಬರುವ ಬರಹಗಳ ಸಂಗತಿಗಳಿಗಿಂತ ಬಳಕೆಯಾಗುವ ಪದ ಮತ್ತು ನುಡಿಬಗೆಯ ಮೇಲೇ ಒತ್ತು.
ತಿಳಿಗನ್ನಡದ ಕಂಪನ್ನು ಕೆಂಡಸಂಪಿಗೆಯೂ ಬೀರಲಿ ಎಂಬುದು ಸಣ್ಣ ಬಯಕೆ ಕೂಡ. ಕೆಂಡಸಂಪಿಗೆಯ ಬರಹಗಳನ್ನು ನಾವೆಲ್ಲ ಮೆಚ್ಚುವೆವು. ಕೆಂಡಸಂಪಿಗೆ ಕನ್ನಡದ ಒಂದು ಮೇರು ಮಿಂದಾವು(Internet site). ಅದರ ಕನ್ನಡದೂಳಿಗಕ್ಕೆ ನಾವು ತಲೆಬಾಗುವೆವು.

ನನ್ನಿ

-ತಿಳಿಗನ್ನಡಿಗರು.


ಹಳೆ ಪಾತ್ರೆ, ಹೊಸ ಕಬ್ಬಿಣ

ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರ ಹೋಯಿ
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ

ಚಂದಿರನ ತೂಕಕೆ ಇಡು ಸಂಜೆಯನು ಸೇಲಿಗೆ ಬಿಡು
ಬೂಮಿನ ಬಾಡಿಗೆ ಕೊಡು ಸಾಕು
ಲೋಕವ ಮೂಟೆ ಕಟ್ಟು ಬಾರಲೇ ಸಯ್ಕಲ್ ಹತ್ತು
ಲೋಕವ ಮೂಟೆ ಕಟ್ಟು ಬಾರಲೇ ಸಯ್ಕಲ್ ಹತ್ತು
ಯಾತಕೆ ದೂಸರಾ ಮಾತು? ಎಲ್ಲಾ ಟಯ್ಮ್ ವೇಸ್ಟು

ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರಾ ಹೋಯಿ
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ

ನೋಡು ಮುಂಗಾರು ಮಳೆ ಅದರೊಳಗೆ ಹೇಳವ್ರೆ
ಈ ಪ್ರೀತಿ ಎಂದೂ ಅತಿ ಮದುರ ತ್ಯಾಗ ಅಮರ

ಬೇಡುವೆನು ಓ ಚಿನ್ನ ಮಾಡಿ ಬಿಡು ತ್ಯಾಗಾನ
ನಿಂತು ಬಿಡು ಜೋಗದ ಗುಂಡೀಲಿ ಬಿಟ್ಟು ಬಿಡು ಈ ನನ್ನ
ಹಳೆ ಹುಡುಗಿ ಹೆಸರೇ ತೆಗೆಯದಲೇ ನಿನ್ನ ಮುಂದೆ ಸಾಚಾ ಆಗಿರುವೆ
ದಿನ ರಾತ್ರಿ ನಿನ್ನ ಮನೆಗೆ ಬರುವೆನು ನಾ ಕೊನೆಯವರೆಗೂ

ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರಾ ಹೋಯಿ
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ

-

ಇತ್ತೀಚೆಗೆ ನಮ್ಮ ಕನ್ನಡ ನಾಡಿನ ಹಿರಿಯ ಸಿನಿಮಾಡಿಗ(Cinema Actor) ರಾಜೇಶ್ ರವರು ಈ ಹಾಡಿನ ಬಗ್ಗೆ ಹರಿಹಾಯ್ದುದರ ಬಗ್ಗೆ ತುಸು ಮಾತುಕತೆಯಿದು. ಈ ಹಾಡು ತುಂಬ ಕೆಳಮಟ್ಟದ್ದು, ಹಾಗೆ, ಹೀಗೆ ಅಂತ ನನ್ನ ಗೆಳೆಯ ನನಗೆ ಮಿಂಮಾತುನಲ್ಲಿ(chat) ಹೇಳುತ್ತಿದ್ದ. ಅದಕ್ಕೆ ಅವನು ಪುರಾವೆಯಾಗಿ ಈ ತಮಿಳು-ಹಣೆನಾಮವನ್ನು ಏರಿಸಿಕೊಂಡಿದ್ದ ರಾಜೇಶ್ ರವರ ಹೇಳಿಕೆಯ ಕೊಂಡಿಯನ್ನು ಕೊಟ್ಟ . ಏನೋ ಅವನಿಗೆ ಬರೆವಣಿಗೆಗೆ ಒಂದು ಮೇಲ್ಮಟ್ಟ ಎಂಬುದಿದೆ. ಮೇಲ್ಮಟ್ಟದ ಬರಹವೆಂದರೆ ಉವೋ ’ಇಂತಿಪ್ಪ’ ಎಂಬ ಪದಗಳನ್ನೇ ಬಳಸೀ ಬಳಸೀ, ಬರೆದ ಬರಹಗಳು, ಕವನಗಳು ಎಂಬ ಮರುಳು. ಅದಕ್ಕೆ ನಾನು “ನೋಡಪ್ಪ, ಇದು ಮನತಣಿಸುವ ಕೆಲಸ. ಇದರಲ್ಲಿ ತುಂಬ ಮಡಿವಂತಿಕೆ ಮತ್ತು, ಅಂತೇ ಹೇಳುವ ‘ಸಬ್ಯತನ’ವನ್ನು ಹೇರಬಾರದು. ಸಿನಿಮ ಒಂದು ಹೊಸತನವನ್ನು ಹುಡುಕುವ(experimental innovation) ನೆಗಳು(ರಚನೆ). ಅದರಲ್ಲೂ ಈ ಹಾಡು ಯಾವ ಎಲ್ಲೆಯನ್ನೂ ಮೀರಿ ಕೆಟ್ಟಿಲ್ಲ.  ಇದರಲ್ಲಿ ಒಬ್ಬ ಹಳೆ ಪಾತ್ರೆ,ಕಬ್ಬಿಣ ಮತ್ತು ಕಾಚಗದವನೂ ಕೂಡ ‘ಒಹ್, ನನ್ನ ಕೆಲಸಕ್ಕೆ ನಂಟಿರುವುದು ಈ ಹಾಡಿನಲ್ಲಿ ಎನೋ ಇದೆ’ ಅಂತ ಆತನ ಗಮನವನ್ನು ಸೆಳೆಯುವಂತಹ ಪದಗಳು ಅದರಲ್ಲಿವೆ. ಮತ್ತು ಒಬ್ಬ ಮಾಮೂಲಿ ಮಂದಿಯೂ ಕೂಡ ತನ್ನ ಬದುಕಿಗೆ ನಂಟಿರುವ ಸಂಗತಿಗಳನ್ನು ಈ ಹಾಡಿನಲ್ಲಿ ಪಡೆಯುಬೋದು. ನಂಟಿಲ್ಲದವರು ಈ ಹಾಡನ್ನು ಕೇಳಿ ಮನಸ್ಸನ್ನು ಹಗುರ ಮಾಡಿಕೊಳ್ಳಬೋದು. ಬರಹವೆಂಬುದು ಕೇಳುವ ಮಾತನ್ನು ನೋಡವ ಬರವಣಿಗೆಗೆ ತರುವುದಶ್ಟೇ ಹೊರತು, ಅದರಲ್ಲಿ ಯಾವ ಮಡಿ ಮಯ್ಲಿಗೆಯಿಲ್ಲ. ಅವರವರ ಮನದಂತೆ ಅವರಿಗೆ ಬೇಕಾದಂತೆ ಬರಹಗಳನ್ನು ನೆಗಳಿಕೊಳ್ಳಲು ಯಾವ ಅಡ್ಡಿಯೂ ಇರಬಾರದು.” ಎಂದು ಹೀಗೆ ಬಿಡಿಸಿದೆ. ಅವನು ತಬ್ಬಿಬ್ಬಾದ. ಅವನು ತನ್ನ ಕಿರಿದಾದ ಮನದ ಹರವಿನ ಬಗ್ಗೆ ತುಸು ಊಂಕಿಕೊಳ್ಳಬೇಕು.

-

ಅವನನ್ನು ಇನ್ನು ಸಿಕ್ಕಿಸಲು ‘ ಅವನಿಗೆ ಹಾಡಿನ ಪದಗಳನ್ನು ತೋರಿಸಿ, ಹೇಳು ಯಾವುದು ಕೆಟ್ಟ ಪದ’ ಎಂದು ತುಸು ಗಟ್ಟಿಯಾದೆ. ಅದಕ್ಕೆ ಆತನು ಮಾತಿನ ವರಸೆಯನ್ನು ತಿರುಗಿಸಿ “ನಾನು ಕೆಟ್ಟ ಪದಗಳಿವೆ ಅಂತ ಹೇಳಲಿಲ್ಲ, ಒಳ್ಳೇ ಟೇಸ್ಟ್ ಇಲ್ಲ ಅಂತ ಹೇಳಿದೆ” ಅಂತ ಹೇಳಿದ. “ಏನಪ್ಪ ಟೇಸ್ಟು ಎಂಬುದು ಅವರವರ ಒಳಮೆ ಅಲ್ಲವೇ. ನಿನ್ನ ಟೇಸ್ಟೇ ಸರಿಯಿಲ್ಲ ಎಂದರೆ ಏನು ಮಾಡುವೆ” ಎಂದುದಕ್ಕೆ ಮುನಿಸಿಕೊಂಡು ಮಾತು ಮುರಿದು ಹೋದ.

-

ಉಶ್ಟೇ ಬರಹಗಳನ್ನು ಬರೆದರೂ, ಉಸಿರಾಡುತ್ತಿರುವ, ಲವಲವಕೆಯ ಆಡುಗನ್ನಡವೇ ದಿಟವಾದ ಕನ್ನಡ. ಕನ್ನಡ ನಾಡಿಗರು ಊಂಕುವುದು(ಯೋಚಿಸುವುದು), ತಮ್ಮ ನಾಳುನಾಳಿನ(ದೈನಂದಿನದ) ಬರಹಗನ್ನಡದಲ್ಲಲ್ಲ. ಅವರ ಬದುಕು ಸರೆಯೋದು ಆಡುಗನ್ನಡದ ಸೊಬಗಿನಲ್ಲೇ, ಹೊರತು ಬರಹಗನ್ನಡದ ಇಕ್ಕಟ್ಟಿನಲ್ಲಲ್ಲ. ಬರಹವೆಂದು ಹೇಳಿ, ಹೊರನುಡಿಯ ಹೇರಳ ಪದಗಳನ್ನು ತುಂಬಿದ, ಯಾರು ಮಾತಾಡದ ಕನ್ನಡದಿಂದ, ಹೆಚ್ಚುಹಲ ಮಂದಿಗೆ ಕನ್ನಡ ಬರವಣಿಗೆ ಸರಿಯಾಗಿ ತಲುಪದೇ, ಕನ್ನಡದ ಬರವಣಿಗೆ ಬರೀ ಕೆಲವರ ಹಿಡತದಲ್ಲೇ ಸಿಕ್ಕಿ ಒದ್ದಾಡುತ್ತಿರುತ್ತದೆ.ಹೆಚ್ಚು ಮಂದಿಯ ಕನ್ನಡ, ಬರಹಕನ್ನಡವಲ್ಲವೇ ಅಲ್ಲ. ಆ ಆಡುಕನ್ನಡದ ಸೊಲ್ಲರಿಮೆ(grammar), ಪದ ಬಳಕೆಗಳೇ ಬೇರೆ, ಅದರ ಸೊಗಡು, ಸೊಗಸೇ ಬೇರೆ. ಅದನ್ನು ನಾವು ಗುರುತಿಸಿ ಹುರಿದುಂಬಿಸಲೇ ಬೇಕು

ನನಗೆ ಈ ಹಾಡು ಮತ್ತು ಅದಕ್ಕೆ ಹೊಂದಿಸಿರುವ ಇನಿಪು(Music) ತುಂಬ ಹಿಡಿಸಿತು. ಏಡಿಗೆ(year) ಒಂದು ಕನ್ನಡ ಸಿನಿಮಾ ನೋಡದೆ ಇರುವವರು ಈ ಹಾಡಿನ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಅಂತ  ನಿಕ್ಕುವ(sure) ಆಯಿತು. ಯಾರಾರ ಹೆಂಗಾರ ಅನ್ನಲಿ, ‘ಜಂಗ್ಲಿ’ ಸಿನಿಮಮನೆಗಳಲ್ಲಿ ಇನ್ನೂ ಓಡುತ್ತಿರುವುದು ಸಂತಸದ ಸುದ್ದಿ.

-

ಅದು ಹಾಗಿರಲಿ, ಈ ತೆರನಾದ ಹಾಡುಗಳು ಯಾಕೆ ಮಂದಿ ಮನಸ್ಸಿನಲ್ಲಿ ಉಳಿಯುತ್ತವೆ ಎಂದು ನೋಡುಮ(ನೋಡೋಣ).

-

ಕವಿರಾಜಮಾರ್ಗದಲ್ಲಿ ಹೀಗೆ ಹೇಳಲಾಗಿದೆ.

-

ನುಡಿಗೆಲ್ಲಂ ಸಲ್ಲದ ಕನ್ನಡದೊಳ್

ಚತ್ತಾಣಮುಂ ಬೆದಂಡೆಯುಮೆಂದು

ಈಗಡಿನ ನೆಗೞ್ತೆಯ ಕಬ್ಬದೊಳ್

ಒಡಂಬಡಂ ಮಾಡಿದರ್ ಪುರಾತನ ಕವಿಗಳ್”

-

(ಕವಿರಾಜಮಾರ್ಗ – 1-32)

-

ಅಂದರೆ ಕನ್ನಡ ನಾಡಿನಲ್ಲಿ ಹಳೆಯ(ಪುರಾತನ) ಹೊತ್ತಿನಿಂದಲೂ ಹಾಡುಗಬ್ಬ(ಶ್ರಾವ್ಯಕಾವ್ಯ) ಮತ್ತು ನೋಡುಗಬ್ಬ(ದ್ರುಶ್ಯಕಾವ್ಯ) ವನ್ನು ಕನ್ನಡಕ್ಕೆ ಒಡಂಬಡಿಸಿದ್ದಾರೆ ನಮ್ಮ ಹಿರಿಹಿರಿಯರು. ಚಿತ್ತಾಣ ಮತ್ತು ಬೆದಂಡೆ ಎಂಬ ಹೆಸರಿನ ಈ ಬಗೆಯ ನಾಡಗಬ್ಬಗಳಿದ್ದವು. ಆ ಕನ್ನಡನುಡಿಗಬ್ಬಗಳನ್ನು ಕಟ್ಟಿದವರು ಇಂತವರೇ ಎಂದು ಹೇಳಲಾಗದು. ಅದಕ್ಕೆ ಕವಿರಾಜಮಾರ್ಗಗಾರನು ಕೂಡ ಹಿರಿಯ ಕಬ್ಬಿಗರ್ ಎಂದೇ ಹೇಳುತ್ತಾನೆ. ಅಂದರೆ ಇದು ನಮ್ಮ (ಕನ್ನಡಿಗರ) ಮನದಾಳಕ್ಕೆ ಈ ಹಿರಿಯ ಕಬ್ಬಿಗರ್ ಕಟ್ಟಿದ ಹಾಡುಗಳ ದಾಟಿಯಲ್ಲಿ, ಅಂದರೆ ಆಡುಮಾತಿನ ದಾಟಿಯಲ್ಲಿರುವ ಹಾಡುಗಳು ತಟ್ಟುತ್ತವೆ ಎಂದಾಯಿತು. ಅಂದರೆ ನಾವು ಯಾವುದೋ ಬೇರೆ ನಡಾವಳಿ(ಸಂಸ್ಕ್ರುತಿ)ಗೆ ಬಗ್ಗದೆ ನಮ್ಮ ತನವನ್ನು ತೋರುವ ಹಾಡುಗಳನ್ನು ಕಟ್ಟುವ ಕೆಲಸವನ್ನು ನಿಲ್ಲಿಸಬಾರದು, ನಿಲ್ಲಿಸಿದರೆ ಅದು ನಮ್ಮ ಕನ್ನಡ ಬುಡಕಟ್ಟಿನ(ಜನಾಂಗದ) ಒಂದು ಬಲು ತಲೆಮೆಯ(ಮುಕ್ಯವಾದ) ನಡಾವಳಿ(ಸಂಸ್ಕ್ರುತಿ)ಯನ್ನು ಕಳೆದುಕೊಂಡಂತೆ.

“]nowrunning.com

[nowrunning.com

ಈ ಬರಹ ಬರೆದು ಮುಗಿಸುವ ಹೊತ್ತಿಗೆ, ದಟ್ಸ್‌ಕನ್ನಡದಲ್ಲಿ ’ಹಳೆ ಪಾತ್ರೆ, ಹಳೆ ಕಬ್ಣ’ ಹಾಡಿನ ನೆಗಳಿಗ ಯೋಗರಾಜಬಟ್ಟರ ಹಾಡುಗಳಿಗೆ ಸಕ್ಕತ್ ಬೇಡಿಕೆ ಎಂಬ ಸುದ್ದಿ ಬಂದಿತ್ತು.

- ಬರತ ಕುಮಾರ